Wednesday 13 March 2024

ಕರಾವಳಿಯ ಸಾವಿರದೊಂದು ದೈವಗಳು


 


#ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


-ನಾಗೇಶ್ ಪೂಜಾರಿ,ವಸಾಯಿ ಪಾಲ್ಘರ್ ಮಹಾರಾಷ್ಟ್ರ

*ಡಾ. ಲಕ್ಷ್ಮಿ ಜಿ ಪ್ರಸಾದ್* ಅವರು ಬರೆದ


ಕೊಡಗು, ಕಾರವಾರದಿಂದ  ಕೊಟ್ಟಯಂವರೆಗಿನ ತುಳು, ಕನ್ನಡ, ಮಲಯಾಳ, ಕೊಡವ ಪರಿಸರದ ಸಾವಿರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಗ್ರಂಥ

*ಕರಾವಳಿಯ ಸಾವಿರದೊಂದು ದೈವಗಳು* ಪುಸ್ತಕ ಓದಿದೆ...... ಓದುತ್ತಾ ಓದುತ್ತಾ ಹೋಗುತ್ತಿರುವಾಗ ಬಹಳಷ್ಟು ವಿಸ್ಮಯ ವಿಚಾರಗಳು ತಿಳಿಯಿತು.....ರೋಮಾಂಚನ ವಾಯಿತು.......ತುಂಬಾ ತುಂಬಾ ಧನ್ಯವಾದಗಳು.....🙏🙏


ನಾಗೇಶ್ ಪೂಜಾರಿ

Vasai, Palghar, Maharashtra.


ಧನ್ಯವಾದಗಳು ಸರ್ ನಿಮಗೆ 🙏

Sunday 18 February 2024

ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥ- ವೆಂಕಪ್ಪ ಬಂಗೇರ

 




ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥ- ವೆಂಕಪ್ಪ ಬಂಗೇರ 


"ಕರಾವಳಿಯ ಸಾವಿರದೊಂದು ದೈವಗಳು"

ಡಾ. ಲಕ್ಷ್ಮೀ ಜಿ.ಪ್ರಸಾದ್ Lakshmi V  ಎಂಬ ಜನಪದ ವಿದುಷಿ ಬರೆದ ಒಂದು ಬೃಹದ್ ಗ್ರಂಥ. ಇದರಲ್ಲಿ ಸಾವಿರಾರು ದೈವಗಳ ಬಗ್ಗೆ ಅದ್ಭುತ ವಿವರಣೆಗಳು ಇವೆ.

ಮಾಯವಾಗುವುದು ಎಂದರೇನು? ಎಂಬುದಕ್ಕೆ ವೈಜ್ಞಾನಿಕ  (ಬ್ರಹ್ಮಾಂಡ ವಿಜ್ಞಾನ) ವಿವರಣೆ ನೀಡಿರುವುದು ಅದ್ಭುತವಾಗಿದೆ. ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥವಾಗಿದೆ. 

ಸಾವಿರಪುಟಗಳ ಸುಂದರ ಅದ್ಭುತ ವಿಮರ್ಶಾತ್ಮಕ ಗ್ರಂಥವಿದು. ದೈವ ಎಂಬುದು ಬರಿ ಕಾಲ್ಪನಿಕ ಕಥೆಗಳು ಅಲ್ಲ!! ಅದರ ಹಿಂದೆ ಸತ್ಯವಿದೆ, ವಿಸ್ಮಯವಿದೆ. ದೈವಗಳು ಸತ್ಯವೆಂದು ಅರಿವಾದರೆ ಪರಮಾತ್ಮನು ಕೂಡ ಸತ್ಯವೆಂದು ತಿಳಿಯುತ್ತದೆ. ಇಂದಿನ ಯುಗದಲ್ಲಿ ಆಸ್ತಿಕತೆಯನ್ನು ಹರಡುವುದು ಧರ್ಮಕಾರ್ಯವಾಗಿದೆ. ತಮ್ಮ ತನುಮನಧನಗಳ ತ್ಯಾಗ ಮಾಡಿ ಲೇಖಕಿಯವರು ಈ ಗ್ರಂಥವನ್ನು ರಚಿಸಿದ್ದಾರೆ. ಇದು ದೈವ ದೇವರ ಅನುಗ್ರಹದಿಂದ ಮೂಡಿಬಂದಿದೆ ಎಂದು ಇದನ್ನು ಓದುವಾಗ ತಿಳಿಯುತ್ತದೆ.

@ಅನುಸರಿಸುವರು Highlight ಮಾತೃಶ್ರೀ ಪ್ರಕಾಶನ ಪ್ರಕಾಶನ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾ


ದ್

Saturday 17 February 2024

ಭೂತಾರಾಧನೆ ದೈವಾರಾಧನೆಗೆ ಅಪಚಾರ ಆಗುತ್ತಿದೆಯೇ? ಡಾ.ಲಕ್ಷ್ಮೀ ಜಿ ಪ್ರಸಾದ


 ಭೂತಾರಾಧನೆ/ ದೈವಾರಾಧನೆಗೆ  ಅಪಚಾರ ಆಗುತ್ತಿದೆಯೇ?

ಡಾ.ಲಕ್ಷ್ಮೀ ಜಿ ಪ್ರಸಾದ 

ಮೊದಲಿಗೆ ದೈವವನ್ನು ಕಾಡಿನ ಮರದ ಕೆಳಗೆ ಕಲ್ಲು ಹಾಕಿ ನಂಬುತ್ತಿದ್ದರು.ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಕೋಲ ಕಟ್ಟಿ ಆರಾಧನೆ ಮಾಡುತ್ತಿದ್ದರು

ದೈವಗಳಿಗೆ ಮೂರ್ತ ರೂಪ/ ಮೂರ್ತಿಗಳು ಇರಲಿಲ್ಲ

ಈಗ ಊರು ನಡುವೆ ಮನೆ ಮುಂದೆ ಕೂಡ ದೈವಸ್ಥಾನಗಳ ನಿರ್ಮಾಣ ಆಗಿದೆ, ಮೂರ್ತಿಗಳ ಪ್ರತಿಷ್ಠಾಪನೆ ಕೂಡ ಆಗಿದೆ 


ಮೊದಲು ರಾತ್ರಿ ಮಾತ್ರ ಕೋಲ ಆಗುತ್ತಿತ್ತು,ಈಗ ನಡು ಮಧ್ಯಾಹ್ನ ಕೂಡ ಆಗುತ್ತಿದೆ


ಮೊದಲು ಅಡಿಕೆ ಹಾಳೆಯ ಮೊಗವನ್ನು ಸ್ಥಳದಲ್ಲಿಯೇ ತಯಾರು ಮಾಡಿ ಬಳಸುತ್ತಿದ್ದರು.ಕೇಪುಳ ಹೂ, ಪಾದೆ ಹೂವಿನಂತಹ ಕಾಡಿನಲ್ಲಿ ಸಿಗುವ ಹೂಗಳನ್ನು ಬಳಸುತ್ತಿದ್ದರು.ಆರತಿ ಮಾಡುವ ಪದ್ಧತಿ ಇರಲಿಲ್ಲ ಧೂಪ ಕರ್ಪೂರ ದ ಬಳಕೆ ಇರಲಿಲ್ಲ.ತೆಂಬರೆ ಹೊರತಾಗಿ ಬೇರೆ ವಾದ್ಯಗಳ ಬಳಕೆ ಇರಲಿಲ್ಲ .

ಸಂಪೂರ್ಣವಾಗಿ ತೆಂಗಿನ ತಿರಿಯ ಅಲಂಕಾರ ಇರುತ್ತಿತ್ತು.

ಆಯಾಯ ದೈವಗಳಿಗೆ ಅವರದ್ದೇ ಆದ ಮುಖವರ್ಣಿಕೆ ಇತ್ತು

ಯಕ್ಷಗಾನದ ನಾಟಕದ ದೇವ ದೇವತೆಗಳಂತೆ ವೇಷ ಭೂಷಣಗಳನ್ನು ಧರಿಸುತ್ತಿರಲಿಲ್ಲ.


ಈಗ ಕೆಲವು ದೈವಗಳ ಫೋಟೋ ನೋಡುವಾಗ ದೈವವಾ? ಯಕ್ಷಗಾನ/ ನಾಟಕದ ದೇವತೆಗಳು ಪಾತ್ರಗಳಾ ಎಂದು ತಿಳಿಯದಾಗಿದೆ . ಮೊದಲು ದೈವಗಳನ್ನು ಶಿವನ ಅಥವಾ ವಿಷ್ಣು ವಿನ ಅವತಾರ ಎಂದೋ ಅಂಶ ಎಂದೋ ಹೇಳುತ್ತಿರಲಿಲ್ಲ..ಈಗ ಎಲ್ಲ ದೈವಗಳೂ ಪುರಾಣ ದೇವತೆಗಳಾಗಿವೆ.ಉದಾ ತನ್ನಿ ಮಾನಿಗ ಆದಿ ಮಾಯೆಯಾಗಿ ಕೊರತಿ ಪಾರ್ವತಿ ದೇವಿಯಾಗಿ, ಉಳ್ಳಾಲ್ತಿ ದುರ್ಗೆಯ ಆಗಿ,ಪಿಲಿ ಭೂತ ವ್ಯಾಘ್ರ ಚಾಮುಂಡಿ ಯಾಗಿ, ಚಾಮುಂಡೇಶ್ವರಿ ಆಗಿ ಬೆರ್ಮೆರ್ ಬ್ರಹ್ಮ ಲಿಂಗೇಶ್ವರ ಆಗಿ ಸಮೀಕರಣಗೊಂಡಿದ್ದಾರೆ

ಇಲ್ಲಿ ಅವತಾರದ ಪರಿಕಲ್ಪನೆಯೇ ಇರಲಿಲ್ಲ..ಈಗ ಎಲ್ಲ ದೈವಗಳೂ ಅವತಾರ ಎತ್ತಿದ ಪುರಾಣ ದೇವತೆಗಳೇ ಆಗಿದ್ದಾರೆ. 

ಕಾಡಿನ ಮರದ ಅಡಿಯಲ್ಲಿ ಕಲ್ಲು ಹಾಕಿ ಆರಾಧಿಸಲ್ಪಡುತ್ತಿದ್ದ ದೈವಗಳಿಗೆ ಭವ್ಯವಾದ ಮಂದಿರಗಳು ನಿರ್ಮಾಣ ಆಗಿ  ಬ್ರಹ್ಮ ಕಲಶ ವೇದೋಕ್ತ ಹೋಮ ಹವನಗಳು ಸತ್ಯನಾರಾಯಣ ಪೂಜೆಗಳು ಆಗುತ್ತಿವೆ 


ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ ? 

ಈಗ ಅನೇಕ ಕಡೆ ದೈವಗಳು ಯಕ್ಷಗಾನ ಬಯಲಾಟದ ವೇಷಗಳಂತೆ ಕಾಣಿಸುತ್ತವೆ.ಪಾಡ್ದನಗಳನ್ನು ಹಾಡಲು ತಿಳಿದವರು ಸಂಖ್ಯೆ ತೀರಾ ಕಡಿಮೆ ಆಗಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ ತಿಳಿದಿದ್ದಾರೆ

ಮೊದಲು ಪಾಡ್ದನ ಹಾಡುತ್ತಾ ಕುಣಿಯುತ್ತಿದ್ದರು ಸಿನಿಮಾ ಅಥವಾ ಇತರೆ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುತ್ತಿರಲಿಲ್ಲ

ಈಗ ವಾದ್ಯಗಳಿಲ್ಲದೆ ಕೋಲವೇ ನಡೆಯುವುದಿಲ್ಲ.

ಸಾವಿರದೊಂದು ದೈವಗಳ ಕೋಲದಲ್ಲಿ ಪಾಡ್ದನ ಬಿಡಿ ಹತ್ತು ದೈವಗಳ ಹೆಸರನ್ನು ಕೂಡ ಹೇಳದೆಯೇ ಅರ್ಧ ಗಂಟೆಯಲ್ಲಿ ಮುಗಿಸುತ್ತಾರೆ.ಹತ್ತುದೈವಗಳ ಹೆಸರು ಕೂಡ ದೈವ ಕಟ್ಟುವವರಿಗಾಗಲೀ,ಮನೆಯವರಿಗೆ ಆಗಲೀ ಗೊತ್ತಿರುವುದಿಲ್ಲ 


ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ? ತಿಳಿದವರು ಹೇಳಬೇಕು


ಇನ್ನು ದೈವಗಳು ಯಾರೊಬ್ಬರ ಸೊತ್ತಲ್ಲ.ದೈವಗಳ ಕಥೆಯನ್ನು ದೈವಗಳ ಪಾತ್ರವನ್ನು ಸಿನಿಮಾ,ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ತೋರಿಸಬಾರದು ಎನ್ನುವುದು ಸರಿಯಲ್ಲ.. ದೈವಗಳನ್ನು ಕೆಟ್ಟದಾಗಿ ತೋರಿಸಿ ಅವಹೇಳನ ಮಾಡಬಾರದು ಎಂದರೆ ಒಪ್ಪಿಕೊಳ್ಳಲೇ ಬೇಕಾದ ಮಾತು


ಮೊದಲು ಭಾಷಿಕವಾಗಿ ಮತ್ತು ಭೌಗೋಳಿಕವಾಗಿ ತುಳುನಾಡು ದ್ವೀಪ ಸದೃಶವಾಗಿತ್ತು.ಹಾಗಾಗಿ ಇಲ್ಲಿನ ದೈವದ ಆರಾಧನೆ ಹೊರಜಗತ್ತಿಗೆ ಹೆಚ್ಚು ತೆಗೆದುಕೊಂಡಿರಲಿಲ್ಲ

ಈಗ ಪರಿಚಯ ಆಗಿದೆ

ಹಾಗಾಗಿ ದೈವಗಳು ಪಾತ್ರವಾಗಿ ಇರುವ ಸಿನಿಮಾ, ಧಾರಾವಾಹಿಗಳು ಆರಂಭವಾಗಿವೆ

ಕಾಂತಾರ ಸಿನಿಮಾಕ್ಕೆ ಮೊದಲೇ ಅನೇಕ ಸಿನಿಮಾಗಳಲ್ಲಿ,ನಾಟಕ ಯಕ್ಷಗಾನ ಬಯಲಾಟಗಳಲ್ಲಿ ದೈವಗಳು ಪಾತ್ರಗಳು ಬಂದಿವೆ

ನಾನು ಪದವಿ ಓದುತ್ತಿದ್ದ ಕಾಲದಲ್ಲಿ ಎಂದರೆ ಮೂವತ್ತು ವರ್ಷಗಳ ಹಿಂದೆಯೇ ಛದ್ಮವೇಷ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಭೂತಕೋಲವನ್ನು ಮಾಡಿದ್ದರು.ಆಗ ಈಗಿನಂತೆ ಮೊಬೈಲ್,face book , WhatsApp ಗಳು ಇರಲಿಲ್ಲ

ವಿರೋಧವೂ ಬಂದಿರಲಿಲ್ಲ


ದೈವಗಳನ್ನು ಅವಹೇಳನಕಾರಿಯಾಗಿ ದೈವದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಧಾರಾವಾಹಿ, ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ದೈವಗಳ ಪಾತ್ರವನ್ನು ತಂದರೆ ಅದು ದೈವಾರಾಧನೆಗೆ ಹೇಗೆ ಅಪಚಾರ ಆಗುತ್ತದೆ? ಎಂದು ನನಗಂತೂ ಗೊತ್ತಾಗುತ್ತಿಲ್ಲ

ಇನ್ನು ಕಾಂತಾರ ಸಿನಿಮಾಕ್ಕೆ ಸಂಬಂಧಿಸಿದಂತೆ ಶಿವನ ತಾಯಿ ಕೆಟ್ಟ ಪದಗಳನ್ನು ಬಳಸಿ ಬೈದಿದ್ದಾರೆ,ಹಿಡಿಸೂಡಿಯಲ್ಲಿ ಹೊಡೆದಿದ್ದಾರೆ.ದೈವ ಕಟ್ಟುವವರಿಗೆ ಹೀಗೆ ಮಾಡುವಂತಿಲ್ಲ‌ಇದು ಅಪಚಾರ ಎಂದು ದಯಾನಂದ ಕತ್ತಲಸಾರ್ ಹೇಳಿದ್ದು ನೋಡಿದೆ

ಕಾಂತಾರ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ ರಿಷಭ್ ಶೆಟ್ಟಿಯವರು ದೈವವನ್ನು ಕಟ್ಟಿಲ್ಲ.ದೈವದ ಅಭಿನಯ ಮಾತ್ರ ಮಾಡಿದ್ದು.ಸಿನೇಮದ ಕಥೆಯಲ್ಲಿ ಕೂಡ ಶಿವ  ಬೇಜವಾಬ್ದಾರಿಯಿಂದ ಉಂಡಾಡಿ ಗುಂಡನಂತೆ ಇದ್ದಾಗ ತಾಯಿಯಿಂದ ಬೈಗುಳ ಪೆಟ್ಟು ತಿಂದಿರ್ತಾನೆ ,ಭೂತಕಟ್ಟಲು ದೀಕ್ಷೆ ಪಡೆದು ನಂತರವಲ್ಲ.ಹಾಗಾಗಿ ಇದು ಅರ್ಥ ರಹಿತ ಆರೋಪ.

ಕಾಂತಾರ ಸಿನಿಮಾದಲ್ಲಿ ಎಲ್ಲೂ  ದೈವಾರಾಧನೆಗೆ ಅಪಚಾರವಾಗಿಲ್ಲ.ಹಾಗಿರುವಾಗ ಕಾಂತಾರ ಫ್ರೀಕ್ವೆಲ್ ನಲ್ಲಿ ದೈವಾರಾಧನೆಯನ್ನು ತೋರಿಸಬಾರದು ಎನ್ನುವುದು ಸರಿಯಲ್ಲ..

ಭೂತಕೋಲದಲ್ಲಿ ಕೂಡ ಆಯಾಯ ದೈವಗಳ ಅಭಿನಯ ಇದೆ.ಇದೊಂದು ಧಾರ್ಮಿಕ ರಂಗಭೂಮಿ ಕೂಡ

ಇದನ್ನು  ಇತರ ಮಾಧ್ಯಮಗಳಲ್ಲಿ ಬಳಸಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ..ದೈವಗಳ ಪಾವಿತ್ರ್ಯಕ್ಕೆ, ಘನತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಬಹುದು.ಒಂದೊಮ್ಮೆ ದೈವಗಳು ಅವಹೇಳನ ಇದ್ದರೆ ವಿರೋಧಿಸಬಹು ಅಷ್ಟೇ..ಅದು ಬಿಟ್ಟು ಮಾಡಬಾರದು ಎಂದು ತಾಕೀತು ಮಾಡುವ ಹಕ್ಕು ಯಾರಿಗೂ ಇಲ್ಲ.. ಅದನ್ನು ಕೇಳುವವರೂ ಇರಲಾರರು

ಇನ್ನು ವಿತ್ತಂಡ ವಾದ ಮಾಡುವುದಾದರೆ ದೈವ ಕಟ್ಟುವವರು ಇತರ ಕೆಲಸ ಮಾಡುವುದು ಸರಿಯಲ್ಲ.. ಅಲ್ಲಿ ಮೇಲಧಿಕಾರಿಗಳು ಬೈಯುದಿಲ್ಲವೇ? ಎನ್ನಬಹುದು ಅದೇ ರೀತಿಯಲ್ಲಿ ಮೈಕ್ ಹಿಡಿದು ಭಾಷಣ ಮಾಡುವುದೂ ಸರಿಯಲ್ಲ.ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರಾಗಿ ಅಧಿಕಾರ ಪಡೆಯುವುದು ಸರಿಯಲ್ಲ.ಎಂಎಲ್ಎ ಟಿಕೆಟ್ ಗಾಗಿ ಯಾರ್ಯಾರದೋ ಕೈಕಾಲು ಹಿಡಿಯುವುದು ಕೂಡ ಸರಿಯಲ್ಲ  ಉಗ್ರರಂತೆ ತುಳು ರಾಜ್ಯಕ್ಕಾಗಿ ಅಲ್ಲಲ್ಲಿ ಬಾಂಬ್ ಹಾಕಬೇಕು ಬೆಂಕಿ ಹಾಕಬೇಕು ಎಂದವರು ದೈವ ಕಟ್ಟುವುದೂ ಕೂಡ ಸರಿಯಲ್ಲ  ಎಂದು ವಿತ್ತಂಡ ವಾದ ಮಾಡಬಹುದು


ಈ ಹಿಂದೆ 2016 ರಲ್ಲಿ  ಹಿರಿಯರಾದ ಎಚ್ ಡಿ ಎಲ್ ರಾಯರು ದೈವಗಳ ಅಣಿ ಅರದಳ ವೇಷ ಭೂಷಣಗಳ ಸಾಕ್ಷ್ಯ ಚಿತ್ರ ಮಾಡಿ ಕಾರ್ಯಾಗಾರ ಮಾಡಿ ಪುಸ್ತಕ ಪ್ರಕಟಿಸಲು ಹೊರಟಾಗ ಕೂಡ ತೀವ್ರ ವಿರೋಧ ಬಂದಿತ್ತು.ಅವರದನ್ನೆಲ್ಲ ಲೆಕ್ಕಿಸದೆ ಕಾರ್ಯಾಗಾರ ಮಾಡಿ ಭೂತಾರಾಧನೆಯ ಅಣಿ ವೈವಿಧ್ಯಗಳ ,ವೇಷ ಭೂಷಣ ಗಳು ವಿವಿಧ ರೀತಿಯ ಮುಖ ವರ್ಣಿಕೆಗಳನ್ನು ಹಾಕಿಸಿ ಫೋಟೋ ತೆಗೆದು ದಾಖಲಿಸಿ ಪ್ರಕಟಿಸಿದೆ ಗ್ರಂಥ ಅಣಿ ಅರದಳ ಸಿರಿ ಸಿಂಗಾರ ಈಗ ಭೂತಾರಾಧನೆಯ ಪರಿಕರಗಳು ಕುರಿತಾಗಿ ಸಚಿತ್ರ ಮಾಹಿತಿ ಇರುವ ರೆಫರೆನ್ಸ್ ಗ್ರಂಥವಾಗಿದೆ


ಇದು ಹೀಗೆಯೇ ಮುಂದುವರೆದರೆ ದೈವಗಳ ಕೋಲದ ವೀಡಿಯೊ ಮಾಡಬಾರದು, ಫೋಟೋ ತೆಗೆಯಬಾರದು, ಭೂತ ಕಟ್ಟುವವರ ಹೊರತಾಗಿ ಇತರರು ಅಧ್ಯಯನ ಮಾಡಬಾರದು,ಪುಸ್ತಕ ಬರೆಯಬಾರದು, ಉಪನ್ಯಾಸ ನೀಡಬಾರದು, ಕೊನೆಗೆ ಹೊರಗಿನವರು ನೋಡಲೂ ಬಾರದು ಎಂದು ಹೇಳಿಯಾರು..


ಡಾ.ಲಕ್ಷ್ಮೀ ಜಿ ಪ್ರಸಾದ

Tuesday 13 February 2024

ಆತ್ಮ ಕಥೆಯ ಬಿಡಿ ಭಾಗಗಳು: ಆಲದ ಮರಗಳು ಇತರ ಗಿಡಗಳನ್ನು ತೊಳೆಯಲು ಬಿಡುವುದಿಲ್ಲ

 ರೇಡಿಯೋ ದಿನಾಚರಣೆಯ ಶುಭಾಶಯಗಳು.


ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.


ನನ್ನ ಬರವಣಿಗೆಯ ಆರಂಭಿಕ ದಿನಗಳಲ್ಲಿ ನನ್ನ ಬರವಣಿಗೆಯ ಅಭಿವ್ಯಕ್ತಿಗೆ ರೇಡಿಯೋ ಸಹಾಯ ಮಾಡಿದೆ‌..

 ಮಂಗಳೂರು ಆಕಾಶವಾಣಿಯಲ್ಲಿ ನನ್ನ ಮೂರು ನಾಲ್ಕು ಭಾಷಣಗಳು,ಐದಾರು ಕಥೆಗಳು ಪ್ರಸಾರವಾಗಿವೆ‌.

ಸಾರಂಗ್ ರೇಡಿಯೋ ಮೂಲಕ ನನಗೆ ತುಂಬಾ ಹತ್ತಿರವಾದವರು ವಿಕೆ ಕಡಬ .

ನನ್ನ ಬಗ್ಗೆ ಸಂದರ್ಶನ ಮಾಡಿ ನನಗೊಂದು ಅಸ್ತಿತ್ವವನ್ನು ಕಟ್ಟಿಕೊಟ್ಟವರು ವಿಕೆ ಕಡಬ

ಇನ್ನೊಂದು ಗಮ್ಮತ್ತಿದ ವಿಚಾರ ಹೇಳ್ತೇನೆ 

ಬಹುಶಃ 1997 ಜನವರಿ ಪೆಬ್ರವರಿ ಇರಬಹುದು.

ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ ‌.ಸಮಯ ಸಿಕ್ಕಾಗೆಲ್ಲ‌ ಅಲ್ಲಲ್ಲಿ  ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಿದ್ದೆ‌.

ಒಂದಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶಿಕಾರಿ ಪುರ ಕೃಷ್ಣ ಮೂರ್ತಿಯವರು ನಾನು ನಡೆಸುವ ಸಂಭಾಷಣಾ ಶಿಬಿರದ ಪಾಠಗಳ ಪಠ್ಯವನ್ನು ವಿಭಜಿಸಿ ಅರ್ಧ ಗಂಟೆಯ 52 ವಿಭಾಗಗಳನ್ನಾಗಿ ಮಾಡಿಕೊಡಲು ಹೇಳಿದರು‌.ಆಕಾಶವಾಣಿಗೆ ಬೇಕು ಎಂದರು ‌.ಸರಿ ಎಂದು ಎರಡು ಮೂರು ದಿನ ಕುಳಿತು 52 ಕಂತು ಅರ್ಧ ಗಂಟೆಗಾಗುವಷ್ಟು ಸಂಭಾಷಣೆ ಬರೆದು ಕೊಟ್ಟೆ.

ಇದಾಗಿ ಒಂದು ಮೂರು ನಾಲ್ಕು ತಿಂಗಳ ನಂತರ ಆಕಾಶವಾಣಿಯಲ್ಲಿ ಒಂದು ದಿನದ  ಸಂಸ್ಕೃತ ಪಾಠ ಮಾಡುವಂತೆ ಆಹ್ವಾನಿಸಿ ನನಗೆ ಪತ್ರ ಬಂದು ಪಾಠ .ಯಾವ ಅಂಶವನ್ನು ಹೊಂದಿರಬೇಕು ಎಂದು ಕೂಡ ತಿಳಿಸಿದ್ದರು.

ನಾನು ಇಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮಾದರಿಯಲ್ಲಿ ಬರೆದು ಅಭ್ಯಾಸ ಮಾಡಿಸಿ ರೆಕಾರ್ಡಿಂಗ್ ಗೆ ಹೋದೆ.

ಅಲ್ಲಿ ಶರಭೇಂದ್ರ ಸ್ವಾಮಿಯವರಲ್ಲಿ ಮಾತಿನ ನಡುವೆ ರೇಡಿಯೋ ಸಂಸ್ಕೃತ ಪಾಠದ ಪಠ್ಯವನ್ನು ನಾನು ತಯಾರಿಸಿ ಕೊಟ್ಟ ಬಗ್ಗೆ ಹೇಳಿದೆ.ಆಗ ನೋಡಬೇಕಿತ್ತು ಅವರ ಮುಖದಲ್ಲಿ ನನ್ನ ಬಗೆಗಿನ ಅಪನಂಬಿಕೆ..ನನ್ನನ್ನು ವಿಚಿತ್ರವಾಗಿ  ನೋಡುತ್ತಾ 

ಶಿಕಾರಿಪುರ ಕೃಷ್ಣ ಮೂರ್ತಿ,ಜಿ ಎನ್ ಭಟ್ ಮೊದಲಾದವರೆಲ್ಲ ಸೇರಿ ತಯಾರಿಸಿದ ಪಠ್ಯ ಇದು ಎಂದರು‌.

ಆಗ ಪಠ್ಯ ತಯಾರಿಸಿದ ನನ್ನ ಬಗ್ಗೆ ಒಂದಕ್ಷರವನ್ನು ಕೂಡ ಹೇಳದೆ ದೊಡ್ಡವರು ಅದರ ಕ್ರೆಡಿಟ್‌ ಅನ್ನು ತಾವೇ ಪಡೆದುಕೊಂಡಿದ್ದಾರೆ ಎಂದು ನನಗೆ ಅರ್ಥವಾಯಿತು.

ನಮ್ಮ ಬಗ್ಗೆ ಗೌರವ ಇಲ್ಲದ ಕಡೆ ತಿರುಗಿ ಕೂಡ ನೋಡದೆ ಇರುವ ಸ್ವಭಾವ ನನ್ನದು.ಹಾಗಾಗಿ ನಂತರ ಆಕಾಶವಾಣಿಗೆ ಬರೆಯುವುದನ್ನು ಬಿಟ್ಟು ಪತ್ರಿಕೆಗಳಿಗೆ ಬರೆಯಲಾರಂಭಿಸಿದೆ.ನಂತರ ಹಿಂತಿರುಗಿ ನೋಡಬೇಕಾದ ಸಂದರ್ಭ ಬರಲಿಲ್ಲ. ಇದಾಗಿ‌ ಸುಮಾರು ಇಪ್ಪತ್ತು ವರ್ಷಗಳ ನಂತರ ಡಾ.ಸದಾನಂದ ಪೆರ್ಲ ಅವರು ಕುವೆಂಪು ಸಾಹಿತ್ಯದಲ್ಲಿ ಪ್ರಕೃತಿ ವರ್ಣನೆ ಬಗ್ಗೆ ಆಕಾಶವಾಣಿಯಲ್ಲಿ ಮಾತನಾಡಲು ಕರೆದರು.ಆಗ ಹೋಗಿದ್ದೆ.ಅದಾದ ನಂತರ ಆ ಕಡೆ ಹೋಗಿಲ್ಲ.

ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.

ಅಂದಿನಿಂದ ಇಂದಿನವರೆಗೂ ಅದೇ ಕಥೆ..

ನನ್ನ ಬ್ಲಾಗ್ ಬರಹಗಳನ್ನು ಓದಿ ಅನೇಕ ದೊಡ್ಡ ವಿದ್ವಾಂಸರು ಭಾಷಣ ಮಾಡುತ್ತಾರೆ. ಅದರೆ ಅಪ್ಪಿತಪ್ಪಿಯೂ ಆ ಬಗ್ಗೆ ಮೊದಲ ಬಾರಿಗೆ ಅಧ್ಯಯನ ಮಾಡಿ ಬರೆದ ನನ್ನ ಹೆಸರನ್ನು ಹೇಳುವುದಿಲ್ಲ ‌.ತಾವೇ ಅಧ್ಯಯನ ಮಾಡಿದವರಂತೆ ಮಾತನಾಡುತ್ತಾರೆ.

ಅಂದಿನಿಂದ ಇಂದಿನವರೆಗೂ ಅದೇ ಕಥೆ

ಉದಾಹರಣೆಗೆ ಇತ್ತೀಚೆಗೆ ಋತುಮಾನದಲ್ಲಿ ಡಾ.ಚಿನ್ನಪ್ಪ ಗೌಡರ ಸಂದರ್ಶನ  ನೋಡಿದೆ ‌ಅದರಲ್ಲಿ ಅವರು ತುಳುನಾಡಿನಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಭೂತಗಳಿಗೆ ಆರಾಧನೆ ಇದೆ ‌.ಒಂದು ಸಾವಿರಕ್ಕಿಂತ ಹೆಚ್ಚು ದೈವಗಳ ಪಟ್ಟಿ ಮಾಡಲಾಗಿದೆ ಎಂದಿದ್ದಾರೆ. ನಾನು ಪಟ್ಟಿ ಮಾಡುವ ತನಕ ಇವರೆಲ್ಲರೂ ತುಳುನಾಡಿನಲ್ಲಿ ನಾನ್ನೂರಷ್ಟು  ದೈವಗಳಿಗೆ ಆರಾಧನೆ ಇದೆ ಎಂದು ಭಾಷಣ ಮಾಡುತ್ತಿದ್ದರು‌.ನಾನೇ ಕೇಳಿರುವೆ‌.ಹಲವಾರು ವರ್ಷಗಳ ಕಾಲ ಕಷ್ಟ ಪಟ್ಟು ನಾನು ಸಾವಿರಕ್ಕಿಂತ ಹೆಚ್ಚಿನ ದೈವಗಳ ಹೆಸರನ್ನು ಸಂಗ್ರಹ  ಪಟ್ಟಿಯನ್ನು ಮಾಡಿ ಅಣಿ ಅರದಳ ಸಿರಿ ಸಿಂಗಾರ ದಲ್ಲಿ  ಹಾಗು ಬ್ಲಾಗ್ ನಲ್ಲಿ ಹಾಕಿದ ನಂತರ ಇವರುಗಳು ಈಗ ಒಂದು ಸಾವಿರಕ್ಕಿಂತ ಹೆಚ್ಚು ದೈವಗಳಿಗೆ ಆರಾಧನೆ ಇದೆ ಎಂದು ಭಾಷಣ ಮಾಡುತ್ತಾರೆ ‌.ಆದರೆ ಆ ಪಟ್ಟಿಯನ್ನು ಮಾಡಿದವರ ಹೆಸರು ಹೇಳಲು ಹೋಗುವುದಿಲ್ಲ‌..ತಾವೇ ಮಾಡಿದವರಂತೆ ಪಟ್ಟಿ ಮಾಡಲಾಗಿದೆ ಎನ್ನುತ್ತಾರೆ...

Saturday 10 February 2024

ಕರಾವಳಿಯ ಸಾವಿರದೊಂದು ದೈವಗಳು - ರಘುಪತಿ ತ್ಹಾಮಣ್ಕರ




""ಡಾ. ಶ್ರೀಮತಿ ಲಕ್ಷ್ಮೀ ಪ್ರಸಾದ್ ರವರೆ.. 

ನೀವು ಬರೆದ ಕರಾವಳಿಯ ಸಾವಿರ ದೊಂದು ದೈವಗಳು ಎಂಬ ಬೃಹತ್  ಗ್ರಂಥ ತಲುಪಿದೆ.


.ನಮ್ಮ ಕರಾವಳಿಯ ಐತಿಹಾಸಿಕ ,ಸಾಂಸ್ಕೃತಿಕ ವಿಶ್ಲೇ ಷಣಾ ತ್ಮಕ  ನೋಟವುಳ್ಳ ದೈವಗಳ ಬಗ್ಗೆ  ಇನ್ನೂ  ಚಾಲ್ತಿ ಯಲ್ಲಿ ಇರುವ ಪ್ರಾಚೀನ ಸಂಸ್ಕೃತಿಯ ಅನಾವರಣ ಇಲ್ಲಿ ಇದೆ..ನಿಮ್ಮ ಸಂಶೋಧನಾ ಗ್ರಂಥಗಳ ಪಟ್ಟಿಯೇ ಈಗಲೇ 21 ದಾಟಿದ್ದು ಇನ್ನೂ ಐದು ಗ್ರಂಥಗಳ ರಚನೆಯಲ್ಲಿ 

ತೊಡಗಿದ್ದೀರೆಂದು ತಿಳಿಯಿತು . ಇವುಗಳೆಲ್ಲವನ್ನೂ ಇಂಗ್ಲಿಷ್ ಸಹಿತ ದೇಶದ ಎಲ್ಲಾ ಭಾಷೆ ಗಳಲ್ಲಿ ತರ್ಜುಮೆ ಯಾಗಿ ದೇಶದ ಹಾಗೂ ಪರದೇಶದ ಜನರೂ ಓದುವಂತೆ   ಆಗಲಿ ಎಂದು ಹಾರೈಸುವೆ .ನೀವು ಬರೆದ ಪುಸ್ತಕವನ್ನು ಪ್ರೀತಿಯಿಂದ ಎತ್ತಿಕೊಂಡ ಫೋಟೋ ವನ್ನು ಕಳುಹಿಸಿದ್ದೇನೆ.. 

- ರಘುಪತಿ ತಾಮ್ಹನ್ ಕರ್ ಮೈಸೂರು


 ಸ್ವತಃ ಲೇಖಕರೂ ಉತ್ತಮ ಗಾಯಕರೂ ಆಗಿರುವ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರರಾದ ರಘುಪತಿ ತಾಮ್ಹನ್ ಕರ್ ಅವರು ಸದಾ ನನ್ನ ಅಧ್ಯಯನ ಮತ್ತು ಬರವಣಿಗೆಗೆ ಪ್ರೋತ್ಸಾಹ ಕೊಡುವವರು.


ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ತಗೊಂಡು ಓದಿ ಶುಭ ಹಾರೈಸಿದ್ದಾರೆ 

 ಧನ್ಯವಾದಗಳು ಸರ್ Raghupathi Thamankar- ಡಾ.ಲಕ್ಷ್ಷೀ ಜಿ ಪ್ರಸಾದ 


Wednesday 31 January 2024

ಕರಾವಳಿಯ ಸಾವಿರದೊಂದು ದೈವಗಳು: ಜಿತೇಶ್

 "ಕರಾವಳಿಯ ಸಾವಿರದೊಂದು ದೈವಗಳು" ಪುಸ್ತಕದೊಂದಿಗೆ.

ಕರಾವಳಿಯ ಎಲ್ಲಾ ದೈವಗಳ ಚಿತ್ರ ಸಹಿತ ಮಾಹಿತಿಯ

ಅದ್ಭುತ ಹೊತ್ತಗೆಯಿದು..ಜ್ಞಾನ ಭಂಡಾರವಿದು

ಲೇಖಕರಾದ Lakshmi V ಅವರಿಗೆ ಧನ್ಯೋಸ್ಮಿ


Tuesday 12 December 2023

ಆತ್ಮ ಕಥೆಯ ಬಿಡಿ ಭಾಗಗಳು‌: ಆತನ್ಯಾರು ?

 ಆತನಾರು? ಆತನ ಉದ್ದೇಶ ಏನಿದ್ದಿರಬಹುದು?


ಹೆಣ್ಣು ಮಕ್ಕಳು ಸದಾ ಜಾಗ್ರತೆಯಿಂದ ಇರಬೇಕು. ನಾನು ಕೂಡಾ ಆ ಕ್ಷಣದಲ್ಲಿ ಎಚ್ಚತ್ತು ಕೊಂಡಿದ್ದೆ.ಇಲ್ಲದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ..ಮೋಸದ ಹಲವು ಜಾಲಗಳಿವೆ.ನಮ್ಮನ್ನು ಕೆಡವಲು ಕಾಯುತ್ತಿರುತ್ತವೆ.ಸಾಮಾನ್ಯವಾಗಿ ಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ನೆಪದಲ್ಲೇ ಮೋಸ ಮಾಡುದು ಎಲ್ಲೆಡೆ ಕಾಣಿಸ್ತಿದೆ.


ಆ ವ್ಯಕ್ತಿ ಕೆಟ್ಟವನೆಂದು ನನಗೆ ಅನಿಸಿಲ್ಲ ಆದರೂ ಆತನ ನಡೆ ಇಂದಿಗೂ ನನ್ನ ಪಾಲಿಗೆ ನಿಗೂಢವೇಆತನಾರು? ಆತನ ಉದ್ದೇಶ ಏನಿದ್ದಿರಬಹುದು?

ನನಗೆ ಇಂದಿಗೂ ಗೊತ್ತಾಗದ ವಿಚಾರ ಇದು.


2012 ಅಕ್ಟೋಬರ್ ನಲ್ಲಿ‌ ಪ್ರಸಾದರಿಗೆ  ಹೃದಯದ ಸಮಸ್ಯೆ ಉಂಟಾಗಿ ಅಸ್ಪತ್ರೆಗೆ ದಾಖಲಾಗಬೇಕಾಯಿತು.ಈ ಸಮಯದಲ್ಲಿ ಬೆಂಗಳೂರಿನಲ್ಲಿ‌ ಪ್ರಸಾದರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ.ನಾನು ಬೆಳ್ಳಾರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ.

ಅ ಸಮಯದಲ್ಲಿ ಬಹಳ ಸಹೃದಯಿಗಳಾದ ಚಕ್ರವರ್ತಿ ಮೋಹನ್ ಎಂಬ ಐ ಎ ಎಸ್ ಅಧಿಕಾರಿಗಳು ನಮ್ಮ ಇಲಾಖೆಯ ನಿರ್ದೇಶಕರಾಗಿದ್ದರು.ಅವರಿಗೆ ನಾನು ವಿಷಯ ತಿಳಿಸಿದೆ.ಸಹೃದಯಿಯಾದ ಅವರು ನನಗೆ ಬೆಂಗಳೂರಿನ ಚಾಮರಾಜ ಪೇಟೆಯ ಸರ್ಕಾರಿ ಪಿಯು ಕಾಲೇಜು ಹೊಸಕೋಟೆಗೆ ನಿಯೋಜನೆ ನೀಡಿದರು.


ಶೈಕ್ಷಣಿಕ ವರ್ಷದ ಕೊನೆಗೆ ನಿಯೋಜನೆಯ ಅವದಿ ಮುಗಿದು ಮತ್ತೆ ಬೆಳ್ಳಾರೆ ಕಾಲೇಜಗೆ ಕರ್ತವ್ಯಕ್ಕೆ ಹಾಜರಾದೆ.ನಂತರ ಪುನಃ ಜೂನ್ ನಿಂದ ಸರ್ಕಾರಿ‌ ಪಿಯು ಕಾಲೇಜು ಕೊನಗಟ್ಟಕ್ಕೆ ನಿಯೋಜನೆ ದೊರೆಯಿತು.

ಅಲ್ಲಿಗೆ ಜುಲೈ ತಿಂಗಳ ಕೊನೆಗೆ ಉಪನ್ಯಾಸಕರೊಬ್ಬರು ವರ್ಗಾವಣೆಯಾಗಿ ಬಂದರು


ಆಗ ಮತ್ತೆ ನಾನು ಮಾಗಡಿ ಹ್ಯಾಂಡ್ ಪೋಸ್ಟ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡಹುದ್ದೆ ಖಾಲಿ ಇರುವುದು ತಿಳಿದು  ಅಲ್ಲಿಗೆ ನಿಯೋಜನೆ ಪಡೆಯಲು ಅರ್ಜಿ ಸಲ್ಲಿಸಿದೆ.


ಈ ಕಾಲಕ್ಕಾಗುವಾಗ ನಮ್ಮ ಇಲಾಖೆಯ ನಿರ್ದೇಶಕರು ಬದಲಾಗಿದ್ದರು.ಬದಲಾಗಿ ಬಂದ ನಿರ್ದೇಶಕರು ಮತ್ತು ನನಗೆ ಬೆಳ್ಳಾರೆಯಲ್ಲಿ ಕಿರುಕುಳ ಕೊಟ್ಟ ಪ್ರಿನ್ಸಿಪಾಲ್ ಸುಬ್ರಾಯ ಗೌಡ ಬಹಳ ಪರಿಚಿತರಾಗಿದ್ದರು .ಅದರಿಂದಾಗಿ ನನಗೆ ನಿಯೋಜನೆ ಸಿಗಲಿಲ್ಲ( ಹಾಗೆಂದು ಸುಬ್ರಾಯ ಗೌಡರೇ  ಹೇಳಿಕೊಂಡಿದ್ದರು.) ಯಾರಿಗೂ ನಿಯೋಜನೆ ಕೊಡುವುದಿಲ್ಲ ಈ ವರ್ಷ ಎಂದಿದ್ದರು.ಆ ಸಮಯದಲ್ಲಿ ಬೆಳ್ಳಾರೆಯ ಇಂಗ್ಲಿಷ್ ಉಪನ್ಯಾಸಕಿ ಸುಮಾ ಅವರು ನಿಯೋಜನೆ ಪಡೆದು ಮೈಸೂರಿನಲ್ಲಿ ಕೆಲಸಮಾಡುತ್ತಿದ್ದರು.ಅವರಿಗೆ ನಿಯೋಜನೆ ಸಿಕ್ಕ ಬಗ್ಗೆ ಹೇಳಿದಾಗ ಆದೇಶದ ಪ್ರತಿ ತರಲು ಹೇಳಿದರು.


ಮತ್ತೆ ನಾನು ನಿರ್ದೆಶಕರಿಗೆ ಅವರಿಗೆ ನಿಯೋಜನೆ ಸಿಕ್ಕ ಆದೇಶದ ಪ್ರತಿ ನೀಡಲಿಲ್ಲ ‌ನಾನು ಜಿದ್ದಿಗೆ ನಿಂತು ನಮ್ಮ ಇಲಾಖೆಯ ವೆಬ್ ನಿಂದ ಅವರಿಗೆ ಸಿಕ್ಕ ನಿಯೋಜನೆಯ ಪ್ರತಿಯನ್ನು ಡೌನ್ ಲೋಡ್ ಮಾಡಿನೀಡಿದರೆ ಅವರ ನಿಯೋಜನೆ ರದ್ದಾಗುತ್ತಿತ್ತೇ ಹೊರತು ನನಗೆ ಸಿಗುತ್ತಿರಲಿಲ್ಲ..


ಹಾಗಾಗಿ ನನಗೆ ಇಲಾಖೆಯಲ್ಲಿ ನನ್ನ ಆತ್ಮೀಯರಾಗಿದ್ದ ಸಹಾಯಕ ನಿರ್ದೇಶಕರೊಬ್ಬರು ಶಿಕ್ಷಣ ಇಲಾಖೆಯ ಕಾರ್ಯ ದರ್ಶಿಗಳಲ್ಲಿ ಮನವಿ ಮಾಡಲು ತಿಳಿಸಿದರು.

ಹಾಗೆ ನಾನು ಬಹುಮಹಡಿ ಕಟ್ಟಡದಲ್ಲಿ ಇರುವ ಕಾರ್ಯ ದರ್ಶಿಗಳ ಕಛೇರಿಗೆ ಬಂದು ಕಾರ್ಯದರ್ಶಿಗಳಾಗಿದ್ದ ಐ ಎ ಎಸ್ ಆಫೀಸರ್  ರಾಜಕುಮಾರ್ ಕತ್ತಿ ಯವರಿಗೆ ವಿಷಯತಿಳಿಸಿ ನಿಯೋಜನೆ ನೀಡಲು ವಿನಂತಿಸಿದೆ.ಅವರು ಆಯಿತೆಂದು ಒಪ್ಪಿದರು.ಎರಡು ದಿನ ಬಿಟ್ಟು ಬರಲು ಹೇಳಿದರು.


ದುರದೃಷ್ಟವಶಾತ್ ಎರಡುದಿನಗಳಲ್ಲಿ ಅವರಿಗೆ ಬೇರೆ ಇಲಾಖೆಗೆ ವರ್ಗವಾಯಿತು.

ಹಾಗಾಗಿ ನನ್ನ ನಿಯೋಜನೆಯ ವಿಚಾರ ಅಲ್ಲೇ ನೆನೆಗುದಿಗೆ ಬಿದ್ದಿತು.ಅಗ ಅಲ್ಲಿ  ಇದ್ದ ಸಹಾಯಕ ಕಾರ್ಯ ದರ್ಶಿ ಅಗಿದ್ದ ವ್ಯಕ್ತಿಯಲ್ಲಿ ವಿಚಾರಿಸಲು ಹೋದರೆ ಖಾಲಿ ಕೈಯಲ್ಲಿ ಹೋದ ನನ್ನನ್ನು  ತಲೆ ಎತ್ತಿ ನೋಡಲಿಲ್ಲ..ನಾನು ಇದಾಗುವ ಕೆಲಸವಲ್ಲ ಎಂದು ಹೊರಗೆ ಬಂದೆ.


ಆ ಸಮಯದಲ್ಲಿ ನನಗೆ ಅಲ್ಲಿಗೆ ಬಂದಿದ್ದ ವ್ಯಕ್ತಿ ಒಬ್ಬರ ಪರಿಚಯ ಆಯಿತು.ಅತ ಸುಮಾರು ಮೂವತ್ತು ಮೂವತ್ತೈದರ ತರುಣ.ನಾನು ಹೊರಗಡೆ ಬಂದಾಗ ಅವರು ಕೂಡಾ ಹೊರಗಡೆ ಬಂದು ನನ್ನ ಸಮಸ್ಯೆಯನ್ನು ಅವರಾಗಿ ಕೇಳಿ ತಿಳಿದರು.ನಾನು ಹೇಳಿದೆ.ಆಗ ಅವರು ನನಗೆ ಕಾರ್ಯದರ್ಶಿಗಳ ಕಛೇರಿಯಲ್ಲಿ ಪರಿಚಯದವರು ಇದ್ದಾರೆ .ನಾನು ಮಾತನಾಡಿ ನಿಯೋಜನೆ ಕೊಡಿಸುತ್ತೇನೆ.ನಾಳೆ ಬನ್ನಿ ಎಂದು ಅವರ ಮೊಬೈಲ್ ನಂಬರ್ ಕೊಟ್ಟರು.


ಮರುದಿನ ಪೋನ್ ಮಾಡಿ ಅವರ ಸಮಯಕೇಳಿಕೊಂಡು ಹೋದೆ.ಅವರು ಕಾಯುತ್ತಿದ್ದರು.

ಅವರಿಗೆ ಅಲ್ಲಿನವರ ಪರಿಚಯ ಇದ್ದದ್ದು ಹೌದು.ಕೆಲವರು ಇವರಿಗೆ ವಿಶ್ ಮಾಡಿದ್ದನ್ನು ಗಮನಿಸಿದೆ.


ಅಲ್ಲಿ ಓರ್ವ ಕ್ಲರ್ಕ್ ನನಗೆ ನಿಯೋಜನೆ ನೀಡುವಂತೆ ಕಾರ್ಯದರ್ಶಿಗಳು ಇಲಾಖೆಗೆ ಬರೆದಿರುವ ಬಗ್ಗೆ ಮಾಹಿತಿ ನೀಡಿದರು.

ನಂತರ ಎರಡು ದಿನ ಕಳೆದು ಬರಲು ಹೇಳಿದರು.

ಮತ್ತೆ ಎರಡು ದಿನ ಬಿಟ್ಟು ಅ ವ್ಯಕ್ತಿಗೆ ಕರೆ ಮಾಡಿ ಹೋದೆ.

ಸಂಜೆ ಹೊತ್ತು ನಾಲ್ಕುಗಂಟೆಗೆ ಬರಲು ಹೇಳಿದ್ದರು.

ಅ ದಿನವೂ ಹೊರಗೆ ಕಾದಿದ್ದರು.ಅವರಲ್ಲಿ  ಕಚೇರಿಗೆ ಹೋಗುವ ಎಂದೆ.


ಆಗ ಅವರು ಬೇಡ..ಈಗ ತಡ ಅಯಿತು‌.ಈಗ ಯಾರೂ ಸಿಗುವುದಿಲ್ಲ‌‌ .ಬನ್ನಿ ಹೋಟೆಲಿಗೆ ಹೋಗೋಣ ಎಂದರು. 

ತಕ್ಷಣ ನನಗೇಕೋ ಅಪಾಯದ ವಾಸನೆ  ಬಡಿಯಿತು‌.ಯಾವ ಹೋಟೆಲ್ ಎಂದು ಕೇಳಿದೆ.ಅಲ್ಲೇ ರಸ್ತೆ ಬದಿಯಲ್ಲಿ ಇರುವ ಉಪಾಹಾರ ದರ್ಶಿನಿಗಾದರೆ ಹೋಗುದರಲ್ಲಿ ತಪ್ಪೇನೂ ಇರಲಿಲ್ಲ.


ಆದರೆ ಅವರು ಅಲ್ಲಿಗೆ ಸಮೀಪದಲ್ಲಿ ಅವರ ಸ್ನೆಹಿತರ  ಲಾಡ್ಜ್ ಕಮ್ ಹೋಟೆಲಿದೆ ಅಲ್ಲಿ  ತಾನು ಉಳಿದುಕೊಂಡಿದ್ದೇನೆ .ಅಲ್ಲಿಗೆ ಹೋಗೋಣ" ಎಂದರು.

ಇಲ್ಲ..ನಾನು ಹಾಗೆಲ್ಲ ಅಪರಿಚಿತರ ಜೊತೆಗೆಹೋಟೆಲಿಗೆ ಹೋಗುವುದಿಲ್ಲ ಎಂದು ನೇರವಾಗಿ ಹೇಳಿದೆ.ನಿಯೋಜನೆ ಸಿಗದಿದ್ದರೆ ಸಾಯಲಿ..ಅಪರಿಚಿತರ ಜೊತೆಗಿನ ಒಡನಾಟ ಅಪಾಯಕಾರಿಯದು ಎನಿಸಿತು.

ವೇತನ ರಹಿತ ರಜೆ ಹಾಕುದು ಎಂದು ನಿರ್ಧರಿಸಿದೆ.

ಹಾಗೆಯೇ ಮಾಡಿದೆ.


ನಂತರ ಪ್ರಸಾದರಿಗೆ  ಚಿಕಿತ್ಸೆ ಫಲಿಸಿ ಗುಣಮುಖರಾದರು.ಅಷ್ಟಾಗುವಾಗ ಬಿ ಎಡ್ ಓದಲು ನಮಗೆ ಒಂದು ವರ್ಷದ ವೇತನ ಸಹಿತ ರಜೆ ಸಿಕ್ತು.ಬಿಎಡ್ ಮುಗಿಯುವಷ್ಟರಲ್ಲಿ ನಮಗೆ ನಿರ್ದೇಶಕರಾಗಿ ಬಹಳ ಸಹೃದಯಿಗಳಾಗಿದ್ದ ಸುಷ್ಮಾ ಗೋಡಬೋಲೆಯವರಿದ್ದರು.ಅವರು ನನಗೆ  ಸರ್ಕಾರಿ ಪಿಯು ಕಾಲೇಜು ಸೂಲಿಬೆಲೆಗೆ ನಿಯೋಜನೆ ನೀಡಿದರು.

ಮತ್ತೆ ಶೈಕ್ಷಣಿಕ ವರ್ಷಾಂತ್ಯಕ್ಕೆ ನಿಯಮಾವಳಿಯಂತೆ ಬೆಳ್ಳಾರೆ ಕಾಲೇಜಿಗೆ ಹೋದೆ.


ನಂತರ ಬೇಸಗೆ ರಜೆ..ಜೂನ್- ಜುಲೈ  ನಲ್ಲಿ  ಜೆನರಲ್ ಟ್ರಾನ್ಫರ್ ಇತ್ತು.ಈ ಬಾರಿ ಬಿಎಡ್ ಪದವಿ ಪಡೆದು ನನ್ನ ಕೆಲಸ ಖಾಯಂ ಪೂರ್ವ ಪರೀಕ್ಷಾವಧಿ ತೃಪ್ತಿಕರ ಎಂದು ಘೋಷಣೆ ಅಗಿ ಟ್ರಾನ್ಸ್ಫರ್  ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿದ್ದೆ.


ಬೆಂಗಳೂರು ಸುತ್ತಮುತ್ತಲಿನ ಕಾಲೇಜಿಗೆ ಟ್ರಾನ್ಸಪರ್ ಸಿಗಬಹುದು.ಒಂದೊಮ್ಮೆ ಸಿಗದಿದ್ದರೆ ಮತ್ತೆ ನಿಯೋಜನೆ ಕೇಳಿದರಾಯಿತು.ಒಂದೆರಡು ತಿಂಗಳು ತಾಯಿ ಮನೆಯಿಂದ ಬೆಳ್ಳಾರೆ ಕಾಲೇಜಿಗೆ ದಿನಾಲು ಹೋಗಿ ಬರುವುದೆಂದು ನಿರ್ಧರಿಸಿ ಹಾಗೆಯೇ ಮಾಡಿದೆ.


ನನ್ನ ದುರದೃಷ್ಟವೋ ಅಥವಾ ಪ್ರಿನ್ಸಿಪಾಲ್ ಮತ್ತವರ ಬೆಂಬಲಿಗರ ದುರದೃಷ್ಟವೋ ಗೊತ್ತಿಲ್ಲ‌


ಜೂನ್ ಜುಲೈ ತಿಂಗಳಿನಲ್ಲಿ ಆಗುತ್ತಿದ್ದ ವರ್ಗಾವಣೆ ಮುಂದೆ ಹೋಗಿ ಸೆಪ್ಟಂಬರ್ ಬಂದರೂ ಆಗಲಿಲ್ಲ.

ಈ ಸಮಯದಲ್ಲಿ ಹಿಂದಿನ ದ್ವೇಷ ಇಟ್ಟುಕೊಂಡು ಆ ಪ್ರಿನ್ಸಿಪಾಲ್ ಮತ್ತು ಕೆಲವು ಸಹೋದ್ಯೋಗಿಗಳು ನನಗೆ ಕಿರುಕುಳ ನೀಡಿದ್ದರು ಅಗ ಅವರುಗಳ ಮೇಲೆ ಸುಳ್ಯ ಪೋಲೀಸರಿಗೆ ದೂರು ನೀಡಿದ್ದೆ.

ಅದಾಗಿ ಕೆಲವೇ ದಿನಗಳಲ್ಲಿ ವರ್ಗಾವಣೆ ಕೌನ್ಸಿಲಿಂಗ್ ನಡೆಯಿತು‌.


ನನ್ನ ಸರದಿ ಬರುವಾಗ ನೆಲಮಂಗಲ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ಖಾಲಿ ತೋರಿಸುತ್ತಿತ್ತು.ಬದುಕಿದೆಯಾ ಬಡಜೀವ..ಎಂದು ಅದನ್ನೇ ಅಯ್ಕೆ ಮಾಡಿಕೊಂಡು ,ನನ್ನವರಾರೂ ಇಲ್ಲದ ಬೆಳ್ಳಾರೆಯ ವಿಷ ವರ್ತುಲದಿಂದ ಪಾರಾಗಿ ಬಂದೆ.


ಮತ್ತೆಂದೂ ನನಗೆ ವೃತ್ತಿ ಜೀವನದಲ್ಲಿ ಸಮಸ್ಯೆ ಕಾಡಲಿಲ್ಲ.

ಬೆಳ್ಲಾರೆಯಲ್ಲಿ ಕೂಡಾ ಸುಬ್ರಾಯ ಗೌಡ ಪ್ರಿನ್ಸಿಪಾಲ್ ಅಗಿ ಬರುವ ತನಕ ಯಾವುದೇಸಮಸ್ಯೆ ಅಗಿರಲಿಲ್ಲ ನನಗೆ..ಕೆಲವು ಹೈಸ್ಕೂಲಿನ ಸ್ಟಾಪ್ ( ಅಲ್ಲಿ ಹೈಸ್ಕೂಲ್ ಮತ್ತು ಪಿಯು ಕಾಲೇಜು ಒಟ್ಟಿಗೆ ಇತ್ತು) ಮತ್ಸರದಿಂದ ಏನೇನೋ ಕಿತಾಪತಿ ಮಾಡಲು ಹೊರಟಿದ್ದರೂ ನನ್ನನ್ನು ಏನೂ ಮಾಡಲಾಗಿರಲಿಲ್ಲ..


ಸುಬ್ರಾಯ ಗೌಡ ಪ್ರಿನ್ಸಿಪಾಲ್ ಆಗಿ ಬಂದಾಗ ಕಿರುಕುಳ ಕೊಡಲು ಶುರುಮಾಡಿದರು.ಹೈಸ್ಕೂಲಿನಲ್ಲಿ ಡ್ರಾಯಿಂಗ್ ಮಾಸ್ಟ್ರಾಗಿದ್ದ ಮಾಬಲ ಕುಳ ಎಂಬವರಿಗೆ ನನ್ನಲ್ಲಿ ವಿಪರೀತ ಮತ್ಸರ ಇತ್ತು.ಆತ   ಮತ್ತು ಈ ಸುಬ್ರಾಯ ಗೌಡ ಬಹಳ ಸ್ನೇಹಿತರು‌( ಇಬ್ಬರೂ ಅಕಾಲದಲ್ಲಿ ಮರಣವನ್ನಪ್ಪಿದ್ದಾರೆ ) ಇವರಿಬ್ಬರಜೊತೆಗೆ ಇನ್ನೂ ಕೆಲವು ಸೇರಿಕೊಂಡು ಕಿರುಕುಳ ನೀಡಿದ್ದರು.ಅವರುಗಳ ಮೇಲೆ ಎಪ್ ಐ ಅರ್ ಆಗಿ ಸುಳ್ಯ ಕೋರ್ಟ್ ನಲ್ಲಿ ಕೇಸ್  ನಡೆಯುತ್ತಿದೆ..


ಅದಿರಲಿ..ನನಗೆ ಆಗಾಗ ನೆನಪಾಗುದು ನನಗೆ ನಿಯೋಜನೆ ಕೊಡಿಸುತ್ತೇನೆ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯ ವಿಚಿತ್ರ ನಡೆ‌.


ಆತನೇಕೆ ಸಂಜೆ ಹೊತ್ತು ಬರಲು ಹೇಳಿದ ? ನಂತರ ಈಗ ಅಧಿಕಾರಿಗಳು ಯಾರೂ ಸಿಗುವುದಿಲ್ಲ..ಹೋಟೆಲ್ ಗೆ ಹೋಗೋಣ ಎಂದ..ಆತನದು ಬೇರೇನಾದರೂ ವ್ಯವಹಾರ ಇದ್ದಿರಬಹುದಾ ? ಅಥವಾ ನಾನು ವಿನಾ ಕಾರಣ ಆತನನ್ನು ಸಂಶಯಿಸಿದೆನೇ ? ಮತ್ತೆಂದೂ ನಾನವರನ್ನು ನೋಡಲಿಲ್ಲ.ಅವರ ಮೊಬೈಲ್ ನಂಬರ್ ಕೂಡ ಅಸ್ತಿತ್ವದಲ್ಲಿ ಇರಲಿಲ್ಲ

ನಾನೇನಾದರೂ ಆತನನ್ನು ನಂಬಿ ಹೋಟೆಲ್ ಗೆ ಹೋಗಿದ್ದರೆ ಅಪಾಯ ಆಗ್ತಿತ್ತಾ.? ಆತನದೇನಾದರೂ ಹುನ್ನಾರ ಇದ್ದಿರಬಹುದಾ ? ಆತ ಬಹಳ ಸಾತ್ವಿಕ ವ್ಯಕ್ತಿ ಅಗಿದ್ದರೆ ನಾನು ಹೋಟೆಲಿಗೆ ಬರುವುದಿಲ್ಲ ಎಂದ ಬಗ್ಗೆ ತಪ್ಪೆಣಿಸಬೇಕಿರಲಿಲ್ಲ..


ನಾನು ಬರುವುದಿಲ್ಲ ಎಂದಾಗ  ತಕ್ಷಣವೇ  ದುರ್ದಾನ ತಗೊಂಡವರಂತೆ ಒಂದೂ ಮಾತನಾಡದೆ ಅಲ್ಲೇ ಕಾದಿದ್ದ ಅಟೋ ಎಂಬಂತೆ ನಿಂತಿದ್ದ ಅಟೋ ಹತ್ತಿ ಹೋಗಬೇಕಿರಲಿಲ್ಲ

ಅಥವಾ ಸಹಾಯ ಮಾಡಲು ಬಂದ ಅವರನ್ನು ಸಂಶಯಿಸಿದ್ದು ಅವರಿಗೆ ನೋವಾಗಿ ದಡಕ್ಕನೇ ಎದ್ದು ಹೋದರಾ ? ಹಾಗಿದ್ದರೆ ಅದೇ ದಿನ ಅವರ ಮೊಬೈಲ್ ಗೆ ಕರೆ ಮಾಡಿದಾಗ ಆ ಸಂಖ್ಯೆ ಇಲ್ಲ ಎಂದು ಹೇಗೆ ಬಂತು ?


 ಇಂದಿಗೂ ಆ ವ್ಯಕ್ತಿಯ ನಡೆಯ ಬಗ್ಗೆ ಏನೆಂದೂ ನಿರ್ಣಯಿಸಲು ನನಗೆ ಸಾಧ್ಯವಾಗಿಲ್ಲ..ಆದರೂ ಅಪರಿಚಿತರ ಜೊತೆಗೆ ಹೋಟೆಲ್ ಕಮ್ ಲಾಡ್ಜ್ ಗೆ ಹೋಗದಿರುವ  ನನ್ನ ನಿರ್ಧಾರ ತಪ್ಪೆನಿಸಿಲ್ಲ ನನಗೆ..ಮಾಮೂಲಿ  ರಸ್ತೆ ಬದಿಯ ಒಂದು ಹೋಟೆಲಿಗೆ ಹೋಗುದು ಬೇರೆ ..ಲಾಡ್ಜ್ ಕಮ್ ಹೋಟೆಲಿನೊಳಗೆ ಹೋಗುವುದು ಬೇರೆ..ಆ ವ್ಯಕ್ತಿಯ ಹೆಸರು ನನಗೆ ನೆನಪಿದೆ.ಅದರೆ ಅತ ಒಂದೊಮ್ಮೆ ನಿಜಕ್ಕೂ ಸಹೃದಯಿ ಆಗಿದ್ದು ನನಗೆ ಸಹಾಯ ಮಾಡಲು ಯತ್ನ ಮಾಡಿದವರೇ ಅಗಿದ್ದರೆ ನಾನವರ ಹೆಸರು ಹಾಕುದು ತಪ್ಪಾಗುತ್ತದೆ ಹಾಗಾಗಿ ಅವರ ಹೆಸರನ್ನು ಬಹಿರಂಗಗೊಳಿಸುವುದಿಲ್ಲ.


ಸ್ತ್ರೀಯಾಗಿ ನನ್ನೆಚ್ಚರಿಕೆಯನ್ನು ನಾನು ವಹಿಸಿದ್ದು ತಪ್ಪೆಂದು ನನಗೆ ಇಂದಿಗೂ ಅನಿಸುತ್ತಿಲ್ಲ..

ಒಂದು ಮಾತ್ರ ನಾನು ಹೇಳಬಲ್ಲೆ..ಯಾರನ್ನೂ ಸುಲಭಕ್ಕೆ ನೂರಕ್ಕೆ ನೂರು  ನಂಬಬಾರದು .ಮಹಿಳೆಯರು ತಮ್ಮ ರಕ್ಷಣೆಯ ಬಗ್ಗೆ ಸದಾ ಜಾಗೃತರಾಗಿರಬೇಕು.ಹಾಗೆಂದು ಪುರುಷರ ಜೊತೆಗೆ ಸ್ನೇಹವೇ ಮಾಡಬಾರದೆಂದಲ್ಲ..ಅದರೆ ಅದು ಎಲ್ಲೆಯನ್ನು ದಾಟಿ ಹೋಗಬಾರದು.


ನನಗೆ ತುಂಬಾ ಜನ ಹಿರಿ ಕಿರಿಯ ಸ್ನೇಹಿತರಿದ್ದಾರೆ.ಆದರೆ ಅನಗತ್ಯವಾದ ಮಾತು ಕಥೆಯನ್ನು ಮಾಡುವುದಿಲ್ಲ..ಅಗತ್ಯವಾದ ವಿಚಾರಗಳಲ್ಲಿ ಮಾತ್ರ ಮಾತನಾಡುತ್ತೇನೆ.ಸ್ನೇಹಿತರಲ್ಲಿ ಮಾತ್ರವಲ್ಲ..ಸ್ನೇಹಿತೆಯರಲ್ಲೂ ಕೂಡಾ ಅಷ್ಟೇ ಅತಿಯಾದ ಮಾತುಕಥೆ ಇಲ್ಲ..ಸಮಯವೂ ಇಲ್ಲ‌.ಕಾಲೆಜು,ಮನೆ  ಕೆಲಸ ,ಒಂದಿನಿತು ಬರವಣಿಗೆಗೆ ಸಾಕಷ್ಟು  ಸಮಯ ಬೇಕಾಗುತ್ತದೆ.


ನಾನು ಗಂಟೆಗಟ್ಟಲೆ ಪಟ್ಟಾಂಗ ಹೊಡೆಯುದು ಅಮ್ಮನಲ್ಲಿ ಮಾತ್ರ..ಆದರೂ ಸಾಮಾಜಿಕ ಅಂತರ್ಜಾಲದಲ್ಲಿ ಕ್ರಿಯಾಶೀಲವಾಗಿರುವುದನ್ನೇ ತಪ್ಪಾಗಿ ಭಾವಿಸಿ ಏನೆನೋ ಮೆಸೇಜ್ ಮಾಡಿದವರಿದ್ದಾರೆ..ಅಂತಹವರಿಗೆ  ಯಾವುದೇ ಉತ್ತರ ಕೊಡುವುದಿಲ್ಲ  ಮುಲಾಜಿಲ್ಲದೆ ತಕ್ಷಣವೇ ರಿಪೋರ್ಟ್  ಮಾಡಿ  ಬ್ಲಾಕ್ ಮಾಡುತ್ತೇನೆ ನಾನು..ಹಾಗಾಗಿ ತೀರಾ ಉಪಟಳ ಇಲ್ಲ.ನಾನು ಜೋರಿರುವುದೂ ಒಂದು ಪ್ಲಸ್ ಪಾಯಿಂಟ್ ನನಗೆ‌.

ಅದರೂ ಹದಿನೈದು ದಿನಗಳ ಮೊದಲೊಂದು ವ್ಯಕ್ತಿಯ ನಡೆ ನನಗೆ ಸ್ವಲ್ಪ ಅನುಮಾನಾಸ್ಪದ ಎನಿಸಿತು. ನಾನೂ ಸ್ವಲ್ಪ ಎಚ್ಚರಿಕೆ ವಹಿಸಬೇಕಿತ್ತು ಎಂದೆನಿಸಿತು ನನಗೂ, ಈ ಬಗ್ಗೆ ಇನ್ನೊಮ್ಮೆ ಬರೆದು ತಿಳಿಸುತ್ತೇನೆ. 


.